ನೆನ್ನೆ ದಾಖಲಾಗಿದ್ದ ಪಾಸಿಟಿವ್ ಕೇಸುಗಳಿಗಿಂತ ಹೆಚ್ಚು ಜನರು ಇಂದು ಡಿಸ್ಚಾರ್ಜ್ ಆಗಿದ್ದು ಕಾಫಿ ನಾಡಿನ ಜನರಲ್ಲಿ ಮನೆಮಾಡಿದ್ದ ಆಂತಕ ದೂರ ಮಾಡಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ನೆನ್ನೆ 2 ಸಾವು ಸಂಭವಿಸಿ ಒಟ್ಟು 166 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದವು. ಇಂದು ಜಿಲ್ಲೆಯಲ್ಲಿ ಒಟ್ಟು 206 ಕೇಸ್ ಗಳು ಮಾತ್ರ ಪತ್ತೆಯಾಗಿದ್ದು ಸುಮಾರು 182 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಹಾಗೆಯೇ ಇಂದು ಜಿಲ್ಲೆಯಲ್ಲಿ ಯಾವುದೇ ಸಾವು ಸಂಭವಿಸಿರುವುದಿಲ್ಲ.

ತಾಲ್ಲೂಕುವಾರು ನೋಡಿದಾಗ 
  • ಚಿಕ್ಕಮಗಳೂರು 58
  • ಶೃಂಗೇರಿ 09
  • ಮೂಡಿಗೆರೆ 36

 www.newsmalnad.com 

  • ಕೊಪ್ಪ 21
  • ಎನ್ ಆರ್ ಪುರ 24
  • ತರೀಕೆರೆ 10
  • ಕಡೂರು 48
ಹೀಗೆ ಒಟ್ಟು 206 ಪ್ರಕರಣಗಳು ದಾಖಲಾಗಿವೆ.

ಸಾರ್ವಜನಿಕರು ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಂಡು ಸರ್ಕಾರದ ನಿಯಮ ಪಾಲಿಸುವ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕಿದೆ.

18ವರ್ಷ ಮೇಲ್ಪಟ್ಟವರು www.cowin.gov.in ಹಾಗೂ ಆರೋಗ್ಯ ಸೇತು, ಉಮಂಗ್ ಆಪ್ ನ ಮೂಲಕ ರಿಜಿಸ್ಟರ್ ಮಾಡಿಕೊಂಡು ಮುಂದೆ ವ್ಯಾಕ್ಸಿನ್ ತೆಗೆದುಕೊಳ್ಳೀ.
ಅದಕ್ಕೂ ಮೊದಲು ರಕ್ತದಾನ ಮಾಡುವುದನ್ನು ಮರೆಯಬೇಡಿ. ಭಯ ಬೇಡ ಎಚ್ಚರಿಕೆ ಇರಲಿ.