ಚಿಕ್ಕಮಗಳೂರು ಜಿಲ್ಲೆಯಲ್ಲಿ ನೆನ್ನೆ 2 ಸಾವು ಸಂಭವಿಸಿ, ಒಟ್ಟು ದಾಖಲೆಯ 1009 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದವು.
ಇಂದು ಜಿಲ್ಲೆಯಲ್ಲಿ ಸುಮಾರು 560 ಕೇಸ್ ಗಳು ಪತ್ತೆಯಾಗಿದ್ದು ಒಟ್ಟು 273 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳು - 4142
ತಾಲ್ಲೂಕುವಾರು ನೋಡಿದಾಗ
ಚಿಕ್ಕಮಗಳೂರು 66
ಶೃಂಗೇರಿ 130
ಮೂಡಿಗೆರೆ 40
www.newsmalnad.com
ಕೊಪ್ಪ 60
ಎನ್ ಆರ್ ಪುರ 25
ತರೀಕೆರೆ 130
ಕಡೂರು 109
ಹೀಗೆ ಒಟ್ಟು 560 ಪ್ರಕರಣಗಳು ದಾಖಲಾಗಿವೆ.
ಖ್ಯಾತ ಕ್ರಿಕೆಟ್ ತಾರೆ ವೇದಾ ಕೃಷ್ಣಮೂರ್ತಿ ಅವರು ಕೆಲವು ದಿನಗಳ ಹಿಂದಷ್ಟೇ ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು, ಆದರೆ ಈಗ ತಮ್ಮ ಸಹೋದರಿಯನ್ನು ಸಹ ಕೋರೋನಾ ಬಲಿ ಪಡೆದಿದೆ.
ಸಾರ್ವಜನಿಕರು ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಂಡು ಸರ್ಕಾರದ ನಿಯಮ ಪಾಲಿಸುವ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕಿದೆ.
18ವರ್ಷ ಮೇಲ್ಪಟ್ಟವರು www.cowin.gov.in ಹಾಗೂ ಆರೋಗ್ಯ ಸೇತು, ಉಮಂಗ್ ಆಪ್ ನ ಮೂಲಕ ರಿಜಿಸ್ಟರ್ ಮಾಡಿಕೊಂಡು ಮುಂದೆ ವ್ಯಾಕ್ಸಿನ್ ತೆಗೆದುಕೊಳ್ಳೀ.
ಅದಕ್ಕೂ ಮೊದಲು ರಕ್ತದಾನ ಮಾಡುವುದನ್ನು ಮರೆಯಬೇಡಿ.ಭಯ ಬೇಡ ಎಚ್ಚರಿಕೆ ಇರಲಿ


0 Comments