ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾಳೆ ಗಿಡ ನೆಟ್ಟು ಪ್ರತಿಭಟನೆ ಮಾಡುವ ಮೂಲಕ ಚಾಲಕರು ಆಕ್ರೋಶ ಹೊರಹಾಕಿದರು.


ಮಳೆಯಿಂದಾಗಿ ಮೊಣಕಾಲುದ್ದ ಗುಂಡಿ ಬಿದ್ದಿದ್ದು ಕೆಸರು ತುಂಬಿದ್ದ ಮೂಡಿಗೆರೆ ತಾಲೂಕು ಕೊಟ್ಟಿಗೆಹಾರ ಪಟ್ಟಣದ ರಸ್ತೆಯಲ್ಲಿ ಬಾಳೆ ಗಿಡಗಳನ್ನು ನೆಡುವ ಮೂಲಕ ಕೊಟ್ಟಿಗೆಹಾರ ಆಟೋ ಮತ್ತು ಟ್ಯಾಕ್ಸಿ ಚಾಲಕರು ಶನಿವಾರ ತಾವೇ ತಾತ್ಕಾಲಿಕವಾಗಿ ಗುಂಡಿಗಳನ್ನು ಮುಚ್ಚಿ ಪ್ರತಿಭಟಿಸಿದರು.


ಆಟೋಸಂಘದ ಅಧ್ಯಕ್ಷ ನಾಗೇಶ್, ಮತ್ತು ಸದಸ್ಯರಾದ ಮಹೇಶ್, ಯೋಗೇಶ್, ದಿನೇಶ್,ಜಗದೀಶ್, ದಿಲೀಪ್, ದೇವೇಂದ್ರ, ರಮೇಶ್,ರಘು, ಟ್ಯಾಕ್ಸಿ ಚಾಲಕ ರಹಮಾನ್, ಅಜೀದ್, ಹಾಗೂ ಬಿನ್ನಡಿ ಪ್ರಭಾಕರ್ ಇದ್ದರು.