ಚಾರ್ಮಾಡಿ ಘಾಟ್ ನ ಜಲಪಾತಗಳ ಬಳಿ ಜನ ಜಂಗುಳಿಯಾಗಿದೆ. ಲಾಕ್ ಡೌನ್ ಸಡಿಲಗೊಂಡ ನಂತರದ ಅವಧಿಯಲ್ಲಿ ಪ್ರವಾಸಿಗರು ಹೆಚ್ಚಾಗಿ ಚಾರ್ಮಾಡಿ ಘಾಟ್ ಗೆ ಭೇಟಿ ನೀಡುತ್ತಿದ್ದು ವೀಕೆಂಡ್ ದಿನಗಳಲ್ಲಂತೂ ವಾಹನ ಸಂಚಾರಕ್ಕೆ ಕೂಡ ಅಡ್ಡಿಯಾಗುವ ರೀತಿಯಲ್ಲಿ ಜನ ದಟ್ಟಣೆ ಉಂಟಾಗಿದೆ.
ಘಾಟ್ ನ ಮಧ್ಯದಲ್ಲಿ ಬೀಳುವ ಜಲಪಾತಗಳ ಬಳಿ ಜನರು ಮೋಜು ಮಸ್ತಿಯಲ್ಲಿ ಮೈ ಮರೆಯುತ್ತಿದ್ದಾರೆ.
ಮೋಜು ಮಸ್ತಿಯಲ್ಲಿ ಮೈ ಮರೆತ ಪ್ರವಾಸಿಗರು.
ವಾಹನ ಸಂಚಾರಕ್ಕೆ ಪ್ರವಾಸಿಗರ ದಂಡಿನಿಂದ ಬಹಳ ಅಡ್ಡಿಯಾಗಿದೆ, ಈ ಮಧ್ಯೆ ಬೆಂಗಳೂರಿನ ಪ್ರವಾಸಿಯೊಬ್ಬ ಲಾರಿ ಚಾಲಕ ನಿಗೆ ದಾರಿ ಬಿಡದೆ, ರೋಡ್ ನ ಮಧ್ಯದಲ್ಲೇ ಮಾತಿನ ಚಕಮಕಿಗೆ ಇಳಿದಿದ್ದ, ಮಾತು ಜೋರು ಜೋರಾಗುತ್ತಾ ಹೊಡೆದಾಟಕ್ಕೆ ಇಳಿದು ಬಿಟ್ಟಿದ್ದರು, ನಂತರ ಉಳಿದ ಪ್ರವಾಸಿಗರು ಅವರಿಬ್ಬರನ್ನು ಸಮಾಧಾನ ಪಡಿಸಿ ಅಲ್ಲಿಂದ ತೆರಳುವಂತೆ ಮಾಡಿದರು.
ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸದೇ ಓಡಾಡುತ್ತಿರುವ ಜನರು.
ಸೆಲ್ಫೀ ಗೋಳು :
ಕೊರೋನ ವೈರಸ್ ಎಂಬ ಮಹಾಮಾರಿ ರೋಗವನ್ನು ಮರೆತ ಜನರು , ಸೆಲ್ಫಿಗಾಗಿ ಎಲ್ಲೆಡೆ ಮುಗಿಬೀಳುತ್ತಿದ್ದಾರೆ. ಅದರಲ್ಲಿಯೂ ಚಾರ್ಮಾಡಿ ವ್ಯೂ ಪಾಯಿಂಟ್ ನಲ್ಲಂತೂ ಸೆಲ್ಫಿ ಅಬ್ಬರ ಜೋರಾಗಿದೆ.
ಪ್ರವಾಸಿಗರು ಅಂತರ ಕಾಪಾಡಿಕೊಳ್ಳದೆ ಮಾಸ್ಕ್ ಸರಿಯಾಗಿ ಧರಿಸದೇ ಸೆಲ್ಫಿ ಗಾಗಿ ಪ್ರಜ್ಞೆಯಿಲ್ಲದೇ ಒಂದೆಡೆಯಿಂದ ಇನ್ನೊಂದೆಡೆಗೆ ಧಾವಿಸುತ್ತಿದ್ದಾರೆ.
ಪೊಲೀಸರು ಈ ಕುರಿತು ಹೆಚ್ಚಿನ ಗಮನ ಹರಿಸಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.
ವರದಿ : ತನು ಕೊಟ್ಟಿಗೆಹಾರ






0 Comments