ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ  ಚಾರ್ಮಾಡಿ ಘಾಟ್ ನ ಮಲಯಮಾರುತ ಸಮೀಪದಲ್ಲಿ ಬೈಕ್ ಅಪಘಾತ ಉಂಟಾಗಿದೆ.

ದೇವರ ಮನೆ ಪ್ರವಾಸಕ್ಕೆಂದು  ತನ್ನ ಸ್ನೇಹಿತರೊಡನೆ ಬಂದಿದ್ದ ಯುವಕರು, ದೇವರ ಮನೆ ಪ್ರವಾಸ ಮುಗಿಸಿ ಕೊಟ್ಟಿಗೆಹಾರ ಮಾರ್ಗದಿಂದ ಉಡುಪಿಯ ಮಲ್ಪೆ ಗೆ ಸಂಚಾರ ಮಾಡುತ್ತಿದ್ದ ಬೈಕ್ ಸವಾರರು.

ರಸ್ತೆಯ ಕಟ್ಟೆಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ, ಮಲ್ಪೆ ಮೂಲದ ನಂದನ್ ಎಂಬುವನಿಗೆ ತೀವ್ರವಾಗಿ ಪೆಟ್ಟಾಗಿದ್ದು ಇನ್ನೊಬ್ಬನಿಗೆ ಸಣ್ಣ ಪುಟ್ಟ ಗಾಯಾಗಳಾಗಿದೆ, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

ತನು ಕೊಟ್ಟಿಗೆಹಾರ, ವರದಿಗಾರರು.