ಸಾಗರ : (ನ್ಯೂಸ್ ಮಲ್ನಾಡ್ ವರದಿ) ಪಕ್ಕದ ಮನೆಯವರ ಜಾಗದಲ್ಲಿ ಒಣಗಲೆಂದು ಇಟ್ಟಿದ್ದ ಅಡಿಕೆಯನ್ನು ರಾತ್ರೋ ರಾತ್ರಿ ಕಳ್ಳತನ ಮಾಡಿದ ಘಟನೆ ಬೆಳಕಿಗೆ ಬಂದಿದೆ. 

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತಾಳಗುಪ್ಪ ಸಮೀಪದ ತಲವಾಟ ಗ್ರಾಮದಲ್ಲಿ ನಡೆದಿದೆ. ಒಣಗಲೆಂದು ಅಡಿಕೆಯನ್ನು ಪಕ್ಕದ ಮನೆಯವರ ಜಾಗದಲ್ಲಿ ಹಾಕಿದಾಗ ಈ ಕಳ್ಳತನ ನಡೆದಿದ್ದು ಅಂದಾಜು 62 ಚೀಲ ಸಿಪ್ಪೆಗೋಟು ಅಡಿಕೆ ಕಳವಾಗಿದೆ ಎಂದು ತಿಳಿದುಬಂದಿದೆ. ರಾತ್ರಿಯ ವೇಳೆ ಹಾಕಿದ್ದ ಅಡಿಕೆ ಮರುದಿನ ಬೆಳಗಾಗುವಷ್ಟರಲ್ಲಿ ಕಳ್ಳತನವಾಗಿದೆ. 

ಇದನ್ನೂ ಓದಿ : ಜಯಪುರ : ಸರಣಿ ಮನೆಕಳ್ಳತನ ನಡೆಸಿದ್ದ ಆರೋಪಿ ಬಂಧನ

ಈ ಕುರಿತಾಗಿ ಮೋಹನ ನಾಗಾನಾಯ್ಕ ಹಾಗೂ ನೆರೆಮನೆಯಲ್ಲಿರುವ ಮಾವ ಕನ್ನಪ್ಪ ಶಂಬುಲಿಂಗ ನಾಯ್ಕ ಅವರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಪ್ರಕರಣವು ಸಾಗರದ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ. ಪೊಲೀಸರು ಈ ಕುರಿತು ತನಿಖೆ ಆರಂಭಿಸಿದ್ದಾರೆ ಹಾಗೂ ಕಳ್ಳರಿಗಾಗಿ ಬಲೆ ಬೀಸಿದ್ದಾರೆ.