ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಸಾಲ ಮರುಪಾವತಿ ಮಾಡದ ಹಿವಲೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರೋರ್ವರ ಹೋಂ ಸ್ಟೇಯನ್ನು ಬ್ಯಾಂಕ್ ಅಧಿಕಾರಿವರ್ಗ ಹಾಗೂ ಸಿಬ್ಬಂದಿಗಳು ಸೀಜ್ ಮಾಡಿದ್ದಾರೆ.
ಇದನ್ನೂ ಓದಿ : ಶೃಂಗೇರಿ : ಹೆದ್ದಾರಿ ಅಗಲೀಕರಣ ಸಂಬಂಧ ದೇವಸ್ಥಾನ ತೆರವುಗೊಳಿಸದಂತೆ ಸ್ಥಳೀಯರ ಮನವಿ
ಚಿಕ್ಕಮಗಳೂರು ಜಿಲ್ಲೆಯ ಹಿರೇಕೊಳಲೆ ಸಮೀಪದ ಲೈಕ್ ವ್ಯೂ ಹಿರೇಕೊಳಲೇ ಹೋಂ ಸ್ಟೇಯನ್ನು ಪಟ್ಟಣದ ಸಹಕಾರ ಬ್ಯಾಂಕ್ ಸಿಬ್ಬಂದಿಗಳು ಸರ್ಫೆಸಿ ಕಾಯ್ದೆ ಅಡಿಯಲ್ಲಿ ಸೀಜ್ ಮಾಡಿದ್ದಾರೆ. ಈ ಹೋಂ ಸ್ಟೇ ಮಾಲೀಕನಿಗೆ ಅನೇಕ ಬಾರಿ ನೊಟೀಸ್ ನೀಡಿ ಎಚ್ಚರಿಸಿದರು ಕೂಡ ಯಾವುದೇ ಪ್ರತ್ಯುತ್ತರ ಬಾರದ ಕಾರಣ ಅಧಿಕಾರಿಗಳು ಎರಡು ಎಕರೆ ಪ್ರದೇಶವಿರುವ ಹೋಂ ಸ್ಟೇ ಯನ್ನು ಸೀಜ್ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸರ್ಫೇಸಿ ಕಾಯ್ದೆಯ ವಿರುದ್ದ ಮಲೆನಾಡಿನ ಜನ ಈ ಹಿಂದಿನಿಂದಲೂ ಕೂಡ ಆಕ್ರೋಶ ವ್ಯಕ್ತಪಡಿಸಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಈ ಕಾಯ್ದೆ ಅತ್ಯಂತ ಮಾರಕವಾದದ್ದು ಇದರ ಸಾಧಕ ಬಾಧಕಗಳ ಕುರಿತು ಕೂಲಂಕುಷವಾಗಿ ಪರಿಶೀಲನೆ ನಡೆಸಬೇಕೆಂದು ಒತ್ತಾಯಿಸಿದ್ದರು. ವಿರೋಧದ ನಡುವೆಯೇ ಈ ಕಾಯ್ದೆಯನ್ನು ಬಳಸಿಕೊಂಡು ಹೋಂ ಸ್ಟೇ ಸೀಜ್ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೀಡಾಗುವಂತೆ ಮಾಡಿದೆ.
ಈ ಕುರಿತು ಜಿಲ್ಲಾಧಿಕಾರಿಗಳ ಹಾಗೂ ಪೊಲೀಸ್ ಇಲಾಖೆಯ ಅನುಮತಿ ಪಡೆದು ಈ ಕಾರ್ಯವನ್ನು ಬ್ಯಾಂಕಿನ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ನಡೆಸಿರುವ ಮಾಹಿತಿ ಲಭ್ಯವಾಗಿದೆ.





0 Comments