ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಮೂಡಿಗೆರೆಯ ಮಲ್ಲಂದೂರು ಪೊಲೀಸ್ ಠಾಣೆಯ PSI ಸ್ಥಳ ನಿಯುಕ್ತಿ ಆದೇಶವನ್ನು ಒಂದು ವಾರದ ಗಡುವಿನೊಳಗೆ ಹಿಂಪಡೆಯದೆ ಹೋದಲ್ಲಿ ಧರಣಿ ನಡೆಸುವುದಾಗಿ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಪತ್ರದ ಮೂಲಕ ಪೊಲೀಸ್ ಮಹಾನಿರೀಕ್ಷಕರಿಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ : ಮೂಡಿಗೆರೆ ಶಾಸಕನ ಡಬಲ್ ಗೇಮ್ | ತಾನೇ PSI ರವೀಶ್ ನಿಯುಕ್ತಿಗೊಳಿಸುವಂತೆ ಕೋರಿದ್ದ ಪತ್ರ ವೈರಲ್
ಶಾಸಕ ಬರೆದ ಪತ್ರದಲ್ಲೇನಿದೆ :
ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ತಮ್ಮೊಂದಿಗೆ ( ಪೊಲೀಸ್ ಮಹಾ ನಿರೀಕ್ಷಕರು) ನಡೆಸಿದ ಸಂಭಾಷಣೆಯಂತೆ ಮೂಡಿಗೆರೆ ಮತ ಕ್ಷೇತ್ರ ವ್ಯಾಪ್ತಿಯು ನನ್ನ ಮತಕ್ಷೇತ್ರವಾಗಿದ್ದು ಈ ವ್ಯಾಪ್ತಿಯಲ್ಲಿನ ಎಲ್ಲಾ ಪೊಲೀಸ್ ಠಾಣೆಯ ಎಲ್ಲಾ ಉಪ ನಿರೀಕ್ಷಕರನ್ನು ಉಲ್ಲೇಖದಂತೆ ಮುಂದುವರೆಸಲು E-mail ಮುಖಾಂತರ ಕೋರಲಾಗಿತ್ತು, ಆದರೂ ತಾವು ನನ್ನ ಗಮನಕ್ಕೆ ತಾರದೆಯೇ ಮೂಡಿಗೆರೆ ಠಾಣೆಯಲ್ಲಿರುವ ಉಪನಿರೀಕ್ಷಕರಾದ ಶ್ರೀ ರವಿ ಅವರನ್ನು ಹಾಗೂ ಮಲ್ಲಂದೂರು ಠಾಣೆಯ ಉಪನಿರೀಕ್ಷಕರನ್ನು ಬೇರೆಡೆ ಸ್ಥಳ ನಿಯುಕ್ತಿ ಮಾಡಿ ಆದೇಶ ಹೊರಡಿಸಿರುತ್ತೀರಿ, ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತ ದೃಷ್ಟಿಯಿಂದ ಈ ಆದೇಶವನ್ನು ಹಿಂಪಡೆದು, ಮೂಡಿಗೆರೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉಪನಿರೀಕ್ಷಕರಾದ ಶ್ರೀ ರವಿ ಅವರನ್ನು ಕೇಂದ್ರ ಸ್ಥಾನದಲ್ಲೇ ಮುಂದುವರೆಸಬೇಕು ಹಾಗೂ ಮಲ್ಲಂದೂರು ಠಾಣೆಯ ಉಪನಿರೀಕ್ಷಕರ ಸ್ಥಳ ನಿಯುಕ್ತಿ ಆದೇಶವನ್ನು ರದ್ದುಪಡಿಸಬೇಕೆಂದು ಕೋರಿದ್ದಾರೆ.
ಪೊಲೀಸ್ ಮಹಾನಿರೀಕ್ಷಕರ ಕಛೇರಿ ಮುಂದೆ ಧರಣಿ ಕೂರುತ್ತೇನೆ :
ಒಂದು ವೇಳೆ ಅವರ ಮನವಿಯನ್ನು ಪರಿಗಣಿಸಿ ಒಂದು ವಾರದೊಳಗೆ ಹೊರಡಿಸಿರುವ ಆದೇಶವನ್ನು ಹಿಂಪಡೆಯದೆ ಹೋದಲ್ಲಿ ಈ ಕುರಿತಂತೆ ಕಛೇರಿ ಮುಂದೆ ಧರಣಿ ಕೂರುವುದಾಗಿ ಪತ್ರದ ಮುಖೇನ ತಿಳಿಸಿದ್ದಾರೆ.
ಈ ಹಿಂದೆ ಮೂಡಿಗೆರೆ ಕ್ಷೇತ್ರದ ಶಾಸಕರಾದ ಎಂ.ಪಿ ಕುಮಾರಸ್ವಾಮಿ ಅವರು ಮಲ್ಲಂದೂರು ಪೊಲೀಸ್ ಠಾಣೆಯ ಪಿಎಸೈ ರವೀಶ್ ಅವರಿಗೆ ಫೋನ್ ಕಾಲ್ ನ ಮೂಲಕ ಬೆದರಿಕೆ ಹಾಕಿದ್ದ ಆಡಿಯೋ ಎಲ್ಲೆಡೆ ಬಹಳಷ್ಟು ವೈರಲ್ ಆಗಿತ್ತು, ಇದೀಗ ಇನ್ನೊಮ್ಮೆ ಶಾಸಕರು ಬರೆದ ಪತ್ರ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ.





0 Comments