ಹಾಸನ ಜಿಲ್ಲೆಯ ಪೆನ್ಷನ್ ಮೊಹಲ್ಲಾ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗೋವುಗಳನ್ನು ಕಡಿದು ಅದರ ಮಾಂಸವನ್ನು ಮಾರಾಟ ಮಾಡಿ ಅದರಿಂದ ಹಣಮಾಡುವ ಉದ್ದೇಶಹೊಂದಿದ್ದ ಎನ್ನಲಾದ ಸೈಯದ್ ಸಲೀಂ ಎಂಬಾತನ ಕುರಿತಾಗಿ ಮಾಹಿತಿಗಳು ಲಭ್ಯವಾದ ನಿಟ್ಟಿನಲ್ಲಿ ದಾಳಿ ನಡೆಸಿದ ಹಾಸನದ ಪೆನ್ಷನ್ ಮೊಹಲ್ಲಾ ಪಿ.ಎಸೈ ದಿನೇಶ್ ಕುಮಾರ್ ಅವರು ಆರೋಪಿಯನ್ನು ಸೆರೆಹಿಡಿದು ಮೂರು ಹಸುಗಳನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ : ಮಳೆಯ ಆರ್ಭಟಕ್ಕೆ ಮೂಡಿಗೆರೆಯಲ್ಲಿ ಕಡಿಮೆಯಾಗದ ಅವಾಂತರ
ಆದಂಸಾಬ್ ಮಸೀದಿ ಹಿಂಭಾಗದ ಸರ್ದಾರ್ ಪಾಷಾ ಎಂಬುವವರ ಶೆಡ್ ನಲ್ಲಿ ಅಕ್ರಮವಾಗಿರಿಸಲಾಗಿದ್ದ ಹಸುಗಳನ್ನು ವಶಕ್ಕೆ ಪಡೆದು ಆರೋಪಿ ಸೈಯದ್ ಸಲೀಂನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನಾ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದು ಈ ಕುರಿತಾಗಿ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಸಂಪೂರ್ಣ ತನಿಖೆಯ ಬಳಿಕವಷ್ಟೇ ಈ ಕುರಿತಾದ ಹೆಚ್ಚಿನ ಮಾಹಿತಿ ಹೊರಬೀಳಲಿದೆ.




.jpeg)

0 Comments